Wednesday 27 August 2014

ಹೈಯರ್ ಸೆಕೆಂಡರಿ -+1 ತರಗತಿಯ ಉದ್ಘಾಟನೆ



ಶೇಣಿ ಶಾರದಾಂಬಾ ಶಾಲೆಗೆ ನೂತನವಾಗಿ ಮಂಜೂರಾದ ಹೈಯರ್ ಸೆಕೆಂಡರಿ ತರಗತಿಯ ಉದ್ಘಾಟನೆಯನ್ನು ತಾರೀಕು 27-06-2014 ರಂದು ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾದ ಶ್ರೀಯತ ಜೆ.ಎಸ್ ಸೋಮಶೇಖರ ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ಶಾಸಕ ಶ್ರೀ ಅಬ್ದುಲ್ ರಝಾಕ್ ಅವರು ನೆರವೇರಿಸಿದರು.ಸಮಾರಂಭದಲ್ಲಿ ಎಣ್ಮಕಜೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಆಯಿಷ ಎ., ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ಶಂಕರ ರೈ ಮಾಸ್ಟರ್, ಎಣ್ಮಕಜೆ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯ ಶ್ರೀ ಐತ್ತಪ್ಪ ಕುಲಾಲ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯ ಶಂಕರ ಎ೦.ಎಸ್, ಶೇಣಿ ಪ್ರೌಢ ಶಾಲೆಯ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಬಿ.ಪಿ ಶೇಣಿ, ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ವಿಶ್ವನಾಥ ನಾಯಕ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೆಲಿನ್ ಮಚಾದೊ ಎ೦ಬಿವರು ಭಾಗವಹಿಸಿ ಶುಭಾಶಂಸನೆಗೈದರು.ಶೇಣಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ರವೀಂದ್ರನಾಥ ನಾಯಕ್ ಸ್ವಾಗತಿಸಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಂಧಕಿ ಶ್ರೀಮತಿ ಶಾರದಾ ವೈ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.


No comments: