Saturday 2 August 2014

ನುಡಿಮುತ್ತುಗಳು

ಜೀವನವನ್ನು ಸಂತೋಷದಿಂದ ಹೇಗೆ ಕಳೆಯಬೇಕು ಎನ್ನುವದನ್ನು ತಿಳಿಯದಿದ್ದವನು ಮನುಷ್ಯನೇ ಅಲ್ಲ. 
 - ಸರ್ವಜ್ಞ 
ಶಾಲೆ ತರಗತಿಯಲ್ಲಿ ಕೊನೆಗೊಳ್ಳುತ್ತದೆ. ಆದರೆ ಅಲ್ಲಿ ಕಲಿಯುವ ಶಿಕ್ಷಣ ನಮ್ಮ ಬದುಕಿನೊಂದಿಗೆ ಕೊನೆಗೊಳ್ಳುತ್ತದೆ. - ಫ್ರೆಡರಿಕ್‌ ರಾಬರ್ಟಸನ್‌ ಜೀವನವೆಲ್ಲಾ ಬೇವೂ ಬೆಲ್ಲ ,ಎರಡೂ ಸವಿದವನೇ ಕವಿ ಮಲ್ಲ 
 - ಕುವೆಂಪು 
ಕಷ್ಟಗಳು ಹೆಚ್ಚಾದರೆ ಬುದ್ದಿ ಚುರುಕಾಗಿ ಕೆಲಸ ಮಾಡುತ್ತದೆ. - ಎಮರ್ಸನ್‌ ನಗುವಿಲ್ಲದ ದಿನವನ್ನು ನೀವು ಕಳೆದಿರಿ ಎಂದರೆ ಆ ದಿನವನ್ನು ನೀವು ವ್ಯರ್ಥ ಮಾಡಿದಂತೆ. 
- ಚಾರ್ಲಿ ಚಾಪ್ಲಿನ್‌ 
ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ,ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು. 
- ಡಾ. ಎ.ಪಿ.ಜೆ ಅಬ್ದುಲ್ ಕಲಾಂ 
ಅದೃಷ್ಟವಂತ ಎ೦ದರೆ ಅವಕಾಶವನ್ನು ಪಡೆಯುವವನು,ಬುದ್ದಿವಂತ ಎ೦ದರೆ ಅವಕಾಶವನ್ನು ಸೃಷ್ಠಿಸಿಕೊಳ್ಳುವವನು, ಪಡೆದ ಅವಕಾಶವನ್ನು ಉಪಯೋಗಿಸಿಕೊಳ್ಳುವವನೇ ಗೆಲ್ಲುವವನು... !! 
- ಸ್ವಾಮಿ ವಿವೇಕಾನಂದ 
ಒಬ್ಬ ಶಿಕ್ಷಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ.ತಾನು ಉರಿಯದ ದೀಪ ಇನ್ನೊಂದುದೀಪವನ್ನು ಬೆಳಗಿಸಲಾರದು. 
- ರವೀಂದ್ರನಾಥ್ ಟ್ಯಾಗೋರ್. 
ವಿದ್ಯೆ ಗುರುಗಳ ಗುರು 
- ಭ್ರತೃ ಹರಿ. 
ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ 
- ವಿವೇಕಾನಂದ 
ಮನುಷ್ಯನಿಗೆ ಯಾವುದು ಗೊತ್ತಿಲ್ಲವೋ ಅದನ್ನು ತಿಳಿಸುವುದು ವಿದ್ಯಾಭ್ಯಾಸದ ಗುರಿಯಲ್ಲ. ಹೇಗೆ ವರ್ತಿಸಬೇಕೆಂದು ತಿಳಿಸುವುದೇ ವಿದ್ಯಾಭ್ಯಾಸದ ಗುರಿ 
- ಜಾನ್ ರಸ್ಕಿನ್. 
ವಿದ್ಯೆಯೊಂದಿಗೆ ಆದರ್ಶ ಗುಣಗಳು ನಿನ್ನಲ್ಲಿ ಬರದಿದರೆ ನೀನು ಓದಿದ್ದು ವ್ಯರ್ಥ 
 -ಪ್ರೇಮಚಂದ್. 
ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. 
 ಮಹಾತ್ಮ ಗಾಂಧೀಜಿ. 
ಏಳು ಎದ್ದೇಳು ನಿನಗಾಗಿ ಕಾಯುತ್ತಿದೆ ಒಂದು ಸುಂದರ ದಿನ .ಒಳ್ಳೆಯ ಗುರಿಯತ್ತ ನಡೆ. ನಿರ್ದಿಷ್ಟತೆಯ ಜೊತೆ ಓಡು ಸಾಧನೆಗಳ ಜೊತೆ ಹಾರಾಡು ನಿನಗಾಗಿ ಕಾಯುತ್ತಿರುವ ಸುಂದರ ಬದುಕಿದೆ ಏಳು ಎದ್ದೇಳು. 
- ಸ್ವಾಮಿ ವಿವೇಕಾನಂದ 
ಸಾವಿರಾರು ಜನರನ್ನು ಗೆಲ್ಲುವವನು ವೀರನಲ್ಲ, ಮನಸ್ಸನ್ನು ಗೆಲ್ಲುವವನು ವೀರ - 
-ಗೌತಮ ಬುದ್ದ

No comments: