Thursday 2 October 2014


ಗಾಂಧಿ ಜಯಂತಿ ಆಚರಣೆ

ಗಾಂಧಿ ಜಯಂತಿ ದಿನವಾದ ಒಕ್ಟೋಬರ್ 2 ರಂದು ಶಾಲಾ ಅಸೆಂಬ್ಲಿಯಲ್ಲಿ  ಮಕ್ಕಳಿಗೆ ಗಾಂಧೀಜಿಯವರ ಜೀವನ ಮತ್ತು ಧ್ಯೇಯದ ಕುರಿತಾದ ಕಿರು ಪರಿಚಯವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರವೀಂದ್ರನಾಥ ನಾಯಕ್ ಅವರು ನೀಡಿದರು.ಬಳಿಕ ಮಾತನಾಡಿದ ಶಾಲಾ ಶಿಕ್ಷಕ ರಕ್ಷದ ಸಂಘದ ಅಧ್ಯಕ್ಷ  ಶ್ರೀ ಅಬೂಬಕ್ಕರ್ ಪೆರ್ದಣೆ ಅವರು ಮಕ್ಕಳು ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆಯಿತ್ತರು. ಸ್ವಚ್ಛ  ಭಾರತ ಎಂಬ ಗಾಂಧೀಜಿಯವರ ಕನಸನ್ನು   ಸಾಕಾರಗೊಳಿಸಲು  ಮಕ್ಕಳು ಸ್ವಚ್ಛತಾ ಪ್ರತಿಜ್ಞೆಯನ್ನು ಕೈಗೊಂಡರು.ಬಳಿಕ ಶಾಲಾ ಪರಿಸರ,ಶಾಲಾ ಮೈದಾನ ಮತ್ತು ಬಸ್ಸು ತಂಗುದಾಣಗಳನ್ನು ಮಕ್ಕಳು ಶುಚಿಗೊಳಿಸಿದರು.

No comments: